—ಜನಪದ ಲಾವಣಿ.

ಅಭ್ಯಾಸ ಪ್ರಶ್ನೋತ್ತರಗಳು

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊ೦ದು ವಾಕ್ಯಗಳಲ್ಲಿ ಉತ್ತರಿಸಿ.

೧. ಕುಂಪಣಿ ಸರಕಾರ ಹೊರಡಿಸಿದ ಆದೇಶ ಏನು ?

ಕುಂಪಣಿ ಸರಕಾರ ನಿಶ್ಯಸ್ತ್ರೀಕರಣ ಕಾಯ್ದೆಯಡಿ ಎಲ್ಲ ಜನರಿಗೆ ಜೋರ ಮಾಡಿ ಕಸಿದು ಕೊಳ್ಳಿರಿ ಹತಾರ ಎಂಬ ಆದೇಶ ಹೊರಡಿಸಿತು.

೨. ಹಲಗಲಿಯ ನಾಲ್ವರು ಪ್ರಮುಖರು ಯಾರು ?

ಹಲಗಲಿಯ ನಾಲ್ವರು ಪ್ರಮುಖರುಪೂಜೇರಿ ಹನುಮಾ , ಬ್ಯಾಡರ ಬಾಲ , ಜಡಗ , ರಾಮ.

೩. ಹಲಗಲಿ ಗುರುತು ಉಳಿಯದಂತಾದುದು ಏಕೆ ?

ಕುಂಪಣಿ ಸರ್ಕಾರದ ದಂಡು ಹಲಗಲಿಗೆ ಬೆಂಕಿ ಹಚ್ಚಿ ಸುಟ್ಟು ಬೂದಿ ಮಾಡಿದ್ದರಿಂದ ಗುರುತು ಉಳಿಯದಂತಾಯಿತು.

೪. ಯಾವ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ ?

ಹಲಗಲಿಯ ಬಂಟರ ಹತಾರ ಕದನದ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ.

೫. ಹಲಗಲಿ ಗ್ರಾಮ ಎಲ್ಲಿದೆ ?

ಹಲಗಲಿ ಗ್ರಾಮ ಮುಧೋಳ ಸಂಸ್ಥಾನದಲ್ಲಿದ್ದು, ಇಂದಿನ ಬಾಗಲಕೋಟೆ ಜಿಲ್ಲೆಗೆ ಸೇರಿದೆ.

ಹೆಚ್ಚುವರಿ ಪ್ರಶ್ನೋತ್ತರಗಳು

೬. ಒಳಗಿನ ಮಂದಿ ಗುಂಡನ್ನು  ಹೇಗೆ ಹೊಡೆದರು ?

ಒಳಗಿನ ಮಂದಿ ಮುಂಗಾರು ಸಿಡಿಲು ಸಿಡಿಯುವ ಹಾಗೆ ಗುಂಡನ್ನು ಹೊಡೆದರು.

೭. ಅಗಸಿಗೆ ಬಂದು ಹಲಗಲಿ ಬೇಡರಿಗೆ ಬುದ್ಧಿ ಮಾತು ಹೇಳಿದವರು  ಯಾರು ?

ಅಗಸಿಗೆ ಬಂದು ಹಲಗಲಿ ಬೇಡರಿಗೆ ಬುದ್ಧಿ ಮಾತು ಹೇಳಿದವರು ಹೆಬಲಕ ಸಾಬ.

೮. ಲಾವಣಿಕಾರ ಯಾರ ದಯದಿಂದ ಲಾವಣಿ ಹಾಡಿದೆನೆಂದು ಹೇಳಿದ್ದಾನೆ ?